ನಾಳೆ ಏನಾಗುವುದು ಎಂದು ಯಾರೂ ಅರಿಯರು
ಇಂದು ಏನಾಗುವುದು ಎಂಬ ಕುರುಹು ಅರಿಯರು
ಇಂದು-ನಾಳೆಗಳ ಮಧ್ಯೆ ಮುಂದಿನ ಜೀವನ ಅಗೋಚರ !
ಸೀತಾ ಮಾತೆಯಂತಹವರೆ ತನ್ನ ಬದುಕು ಕಾಡಿನಲ್ಲಿ
ಅದು ಕೂಡ ತುಂಬು ಗರ್ಭಿಣಿಯನ್ನು ಶ್ರೀ ರಾಮಚಂದ್ರ
ಕಾಡಿಗಟ್ಟ ಬಹುದು ಎಂಬ ಒಂಚೂರು ಸುಳಿವು ಇಲ್ಲದೆ
ದಿಕ್ಕೇ ತೋಚದದವಳಂತೆ ತನ್ನ ಬಸಿರು-ಬಾಣಂತನ ವನ್ನು
ಶ್ರೀ ವಾಲ್ಮೀಕಿ ಗಳ ಆಶ್ರಮದಲ್ಲಿ ತನ್ನ ಮಕ್ಕಳ
ಲಾಲನೆ-ಪಾಲನೆ ಪೋಷಣೆಯಲ್ಲಿ
ಲವ-ಕುಶರೀರ್ವರ ಜೊತೆ ಕಳೆದಳು
ದ್ರುಪದನ ಮಗಳು ದ್ರೌಪದಿ ಸಹಾ ತಾನು
ಪಂಚ-ಪಾಂಡವರ ಒಬ್ಬಳೇ ಮಡದಿ ಆಗುತ್ತೇನೆಂದು
ಕನಸು-ಮನಸ್ಸಿನಲ್ಲೂ ಅರಿತವಳಲ್ಲ ಪಾಪ
ಪೌರಾಣಿಕ ಯುಗದಲ್ಲೂ ಕುರುಹು ನೀಡದ
ಇಂದು-ನಾಳೆಗಳು ನಮಗೆಲ್ಲಿಯ ಮುನ್ಸೂಚನೆ ನೀಡುತ್ತದೆ?
ಆದ್ದರಿಂದ ಇಂದು-ಇಂದಿಗೆ; ನಾಳೆ-ನಾಳೆಗೆ
ಮುಂದು ಸಹಾ ನಮ್ಮದೇ ಎಂದು
ಶಾಂತ-ಚಿತ್ತತೆ ಇಂದ 'ಜೀವನವ'
ಜೀವ ಇರುವವರೆಗೂ ಸವೆಸಬೇಕು !
ಇದುವೇ ಜೀವ ; ಇದು ಜೀವನ
No comments:
Post a Comment