Tuesday, May 19, 2015

ನನ್ನ ನೆನಪಿನಂಗಳದಿಂದ 6




ನನ್ನ ನೆನಪಿನಂಗಳದಿಂದ 6 ::

ನನ್ನ ಸ್ಮೃತಿ ಪಟಲದ ಪುಟಗಳನ್ನ ತಿರುವಿ ಹಾಕುತ್ತಿರುವಾಗ ಮತ್ತೊಂದು ಘಟನೆ ನೆನಪಾಯಿತು.  ಅದೇನಪ್ಪ ಅಂದ್ರೆ ಆಗೆಲ್ಲ ಈಗಿನ ಹಾಗೆ ೩-೪ ವರುಷ ಗಳಿಗೆಲ್ಲ ಡೇ ಕೇರ್ ,  L K G - U K G ಇವೆಲ್ಲಾ ಇರುತ್ತಲೇ ಇರಲಿಲ್ಲ.    ನಾವಿನ್ನು ಅಮ್ಮನ ತೋಳಿನಲ್ಲಿ ಬೆಳೆಯುತ್ತಿದ್ದೆವು, ಅಕ್ಕ ಅಣ್ಣಂದಿರು ಮುದ್ದಿನಲ್ಲಿ,  ಅಪ್ಪ - ಅಮ್ಮನ ತೋಳಿನಲ್ಲಿ ಅದೆಷ್ಟು ಆನಂದ ಕಂಡಿದ್ದೇವೆ .  ಈಗಿನ ಮಕ್ಕಳನ್ನು ೩ ವರ್ಷಕ್ಕೆಲ್ಲಾ ಬೇಬಿ ಸಿಟ್ಟಿಂಗ್ , ನಂತರ ಎರಡೆರಡು KG  ಪಾಸಾದ ನಂತರ ಮೊದಲನೇ ತರಗತಿ ಗೆ ಸೇರಿಸಿಕೊಳ್ಳುತ್ತಾರೆ.  ನಾವೆಲ್ಲಾ ಒಂದೇ ಸಲ ಮೊದಲನೇ ತರಗತಿ ಗೆ ಸೇರಿದ್ದು .  ಸ್ಲೇಟು ಬಳಪ ಅಷ್ಟೇ ಹಿಡಿದು ಶಾಲೆಗೇ ಹೊಗುತ್ತಿದ್ದೆವು.  ಸಮ ವಸ್ತ್ರ ನೀಲಿ ಬಣ್ಣದ ಲಂಗ ಬಿಳಿ ಬ್ಲೌಸ್ ತೊಟ್ಟರೆ ಅಷ್ಟೇ ಸಾಕು . ಸರ್ಕಾರಿ ಶಾಲೆ ಆದುದರಿಂದ ಉಚಿತ ಪ್ರವೇಶ ಇತ್ತು.  ಈಗಿನ ಮಕ್ಕಳಿಗೆ L K G - U K Gಗಳಿಗೆ ಒಳ್ಳೆ ಶಾಲೆಗೇ ಸೇರಿಸಲು ಲಕ್ಷ ಲಕ್ಷ ತೆ ರ ಬೆಕಾಗುತ್ತದೆ.  ಈಗ ವಿಧ್ಯಾಭ್ಯಾಸ ಮಾರುಕಟ್ಟೆಯಲ್ಲಿ ಮಾರಾಟ ಆಗುವ ವಸ್ತುವಿನಂತೆ ,  ಪೋಷಕರು  ಒಳ್ಳೆ ಶಾಲೆಗಳನ್ನ  ಹುಡುಕಿ ಹುಡುಕಿ ಅದರ ಬಗ್ಗೆ ಅವರಿವರಿಂದ ತಿಳಿದು ಕೊಂಡು ನಂತರ ಮಕ್ಕಳನ್ನು ಶಾಲೆಗೆ ಸೆರಿಸುತ್ತರೆ.  ಮತ್ತೆ ಅವರಿಗೆ ಶಾಲಾ ವಾಹನದ ವ್ಯವಸ್ತೆ ಮಾಡಬೇಕು.  ತದ ನಂತರ ಪೋಷಕರಿಬ್ಬರೂ ದುಡಿಯುತ್ತಿದ್ದರೆ ಇನ್ನೊ೦ದು ರೀತಿ ಪೀಕಲಾಟ ಮಕ್ಕಳನ್ನು ಒಳ್ಳೆ ಬೇಬಿ ಸಿಟ್ಟಿಂಗ್ ಹುಡುಕಿ ಅವರ ಕೇರ್-ಟೆಕರ್ಸ್ ಬಗ್ಗೆ ಗಮನ ಇಡ ಬೆಕು.  ಒಂದಾ ಎರಡಾ ಈಗಿನ ಮಕ್ಕಳ ಸಮಸ್ಯೆ ಹೇಳ ತೀರದು. ನಮ್ಮ ಕಾಲದಲ್ಲಿ ಈ ರೀತಿ ಅತ್ಯಾಚಾರ -ದುರಾಚಾರ ಇರಲಿಲ್ಲ.  ನಾವೆಲ್ಲ ೪-೫ ಮೈಲಿಗಳನ್ನು ನಡೆದು ಕೊಂಡೆ ಹೋಗಿ ನಡೆದು ಕೊಂಡೆ ಬರುತ್ತಿದ್ದೆವು.  ಸ್ನೇಹಿತೆಯರೊಡನೆ ಮಾತನಾಡುತ್ತ ಶಾಲೆಗೆ ಹೊರಡುವುದೇ ಒಂದು ಸಡಗರ.  ಅವರು ರೆಡಿ ಯಾಗಿ ನಮ್ಮ ಮನೆ ಮುಂದೆ  ಬಂದು ಕರೆಯುತ್ತಿದ್ದರು ಅಗ ಅಮ್ಮನಿಗೆ ''ಅಮ್ಮ ಹೋಗಿ ಬರ್ತೀವಿ'  ಎಂದು ಹೇಳದೆ ಹೊರಗಡೆ ಗೆ ಅಡಿ ಇಟ್ಟಿದ್ದೆ ಇಲ್ಲ.  ಅದು ನಮ್ಮ ಮನೆಯಲ್ಲಿ ಚಿಕ್ಕಂದಿನಿಂದ ಎಲ್ಲಿಗೇ ಹೊರಟರು ಎಲ್ಲರಿಗು ಹೇಳಿ ಹೋಗುವ ಪದ್ಧತಿ.  ಅಮ್ಮ ಹೋಗ್ಬರ್ತೀನಿ, ಅಪ್ಪ ಹೋಗ್ಬರ್ತೀನಿ ಇದು ವಾಡಿಕೆ.  ಅರೆರೆ ಇದೇನು ನಾನು ನನ್ನ ಬಾಲ್ಯದ ಬಗ್ಗೆ ಮಾತನಾಡುತ್ತ ಮಾತನಾಡುತ್ತ ನನ್ನನ್ನು ಶಾಲೆಗೆ ಸೇರಿಸಿದ ದಿನವನ್ನು ಹೇಳುವುದೇ ಮರೆತೇ ಬಿಟ್ಟೆ .  ಸರಿ ನನಗಾಗ ಆರು  ವರುಷ ಶಾಲೆಗೆ ಸೇರಿಸುವ ದಿನ  ಬಂದೆ ಬಟ್ಟಿತು !!  ಅಮ್ಮ ದೇವರ ಮುಂದೆ ನನಗೆಂದು ತಂದ ಹೊಸ-ಬಳಪ ಸ್ಲೇಟು ಅನ್ನು ಇಟ್ಟು , ಮೊದಲಿಗೆ '' ಶುಕ್ಲಾಂ  ಬರದರಂ ವಿಷ್ಣುಂ  ಶಶಿವರಣಂ ಚತುರ್ಭುಜಂ  ಪ್ರಸನ್ನ ವದನಂ ಧ್ಯಾಯೇತ್  ಸರ್ವ ವಿಜ್ನೋಪ  ಶಾಂತಯೇ'' ,  ''ಸರಸ್ವತಿ ನಮಸ್ತುಬ್ಯಂ ವರದೇ ಕಾಮ ರೂಪಿಣಿ ವಿದ್ಯಾರಂಭಂ ಕರಿಶ್ಯಾಮಿ  ಸಿದ್ಧಿರ್ ಭವತು ಮೇ ಸದಾ'' , ವಕ್ರ ತುಂದ ಮಹಾ ಕಾಯ  ಸೂರ್ಯ ಕೋಟಿ   ಸಮ ಪ್ರಭ  ನಿರ್ವಿಘ್ನಂ  ಕುರುಮೆ ದೇವ ಸರ್ವ ಕಾರ್ಯೇಷು ಸರ್ವದಾ ''  ಈ ಶ್ಲೋಕಗಳನ್ನು  ನನ್ನಿಂದ ಹೇಳಿಸಿ,  ''ಒಳ್ಳೆ ವಿದ್ಯಾ ಬುದ್ದಿ ಕೊಡಪ್ಪ ದೇವ್ರೇ''  ಎಂದು ತಾನು ನನ್ನೊಂದಿಗೆ ಬೇಡಕೊಂಡರು  ಅಮ್ಮ . ಮತ್ತೆ ಶಾರದೆ , ಗಣಪತಿ ಫೋಟೋ ಮುಂದೆ ಕೂರಿಸಿ ಕೊ೦ಡು '''ಅ  ಆ  ಇ  ಈ ''  ಬರೆದು ಕೊಟ್ಟು ತಿದ್ದಿಸಿದರು.  ಎಲ್ಲಾ ಬಾಯಿ ಪಾಠ ಹೇಳಿಕೊಟ್ಟಿದ್ದರು .  ಖುಷಿ ಇಂದ ಶಾಲೆಗೇ ಸೇರಿಸಿ ಬಂದರು.   ಆಗ ನಮ್ಮ ಶಾಲೆಯಲ್ಲಿ ಶ್ರೀ ರಾಮಮೂರ್ತಿ ಸರ್ ಅಂತ ಇದ್ದರು ಅವರು ಒಂದರಿಂದ  ಏಳನೇ ತ ರಗತಿಯವರಿಗೂ ಕ್ಲಾಸೆಸ್ ತೆಗೆದುಕೊಳ್ಳುತ್ತಿದ್ದರು.  ಮೊದಲ  ದಿನ ನನ್ನನ್ನು ಶಾಲೆಗೇ ಸೇರಿಸಿದಾಗ ರಾಮ ಮೂರ್ತಿ ಸರ್ ನನ್ನನ್ನು ಎತ್ತಿಕೊಂಡು ಹೋಗಿ  ಕುಳ್ಳಿರಿಸಿದರು.  ಅದ್ಯಾಕೋ ಅವರು  ನನ್ನನ್ನು ತುಂಬಾ ಇಷ್ಟ  ಪಡುತ್ತಿದ್ದರು.    ನಮ್ಮ  ಶಾಲೆಯಲ್ಲಿ ಇನ್ನೊಬ್ಬರು ಗಿರಿಜಾ ಟೀಚರ್ ಅಂತ ಇದ್ದರು.  ಅವರು  ರಾಮ  ಮೂರ್ತಿ  ಸರ್  ಹೆಂಡತಿ ಎಂದು  ನನ್ನ ಅಣ್ಣಂದಿರು  ಅಪ್ಪ ಅಮ್ಮನಿಗೆ  ಹೇಳುತ್ತಿದ್ದರು.  ಅವರಿಬ್ಬರೂ  ಸಹ ಶಾಂತ ಸ್ವಭಾವ ದವರಾಗಿದ್ದು ಶಾಲೆಯ ಮಕ್ಕಳನ್ನು  ತಮ್ಮ ಸ್ವಂತ  ಮಕ್ಕಳಂತೆ  ಅಕ್ಕರೆ ಇಂದ ನೋಡಿ ಕೊಳ್ಳುತ್ತಿದ್ದರು.   ನಾನು ಬಾಲ್ಯದಲ್ಲಿ  ಮುದ್ದು ಮುದ್ದಾಗಿ ಬೆಳ್ಳಗೆ ಇದ್ದೆ.    ನಮ್ಮ ರಾಮ ಮೂರ್ತಿ  ಸರ್ ದಂಪತಿಗಳಿಗೆ ಮಕ್ಕಳಿರಲಿಲ್ಲವಂತೆ.   ಹಾಗಾಗಿ ಅವರು  ಶಾಲೆ  ಮುಗಿದ ನಂತರ ನನ್ನನ್ನು ಅವರ  ಮನೆಗೆ ಕರೆದು ಕೊ೦ಡು ಹೋಗಿ ಬಿಡುತ್ತಿದ್ದರು.    ಅವರ ಮನೆಯಲ್ಲೇ ಊಟ  ತಿಂಡಿ ಎಲ್ಲಾ ಕೊಡುತ್ತಿದ್ದರು.    ತುಂಬಾ ಪ್ರೀತಿ ಇಂದ  ಮುದ್ದಾಗಿ ನೋಡಿ ಕೊಳ್ಳುತ್ತಿದ್ದರು.   ರಾಮ ಮೂರ್ತಿ ಸರ್ ಯಾವಾಗಲು ಹೇಳುತ್ತಿದ್ದರು  '' ನಿಮ್ಮ ಅಮ್ಮನಿಗೆ ಮನೆ ತುಂಬಾ ಮಕ್ಕಳು ನಮ್ಮ ಮನೆಯಲ್ಲಿ ಮಕ್ಕಳೇ ಇಲ್ಲ ನೀನು ನಮ್ಮ ಮನೆಯಲ್ಲೇ ಇದ್ದು ಬಿಡು  ಅಂತ ''   ಇನ್ನು ತಮಾಷೆ ಅಂದರೆ ಅವರು ಒಮ್ಮೆ ನಮ್ಮ ಮನೆಗೆ ಬಂದು ನಮ್ಮ ಅಪ್ಪ ಅಮ್ಮನನ್ನು  ಸಹಾ ಕೇಳಿ ಕೊಂಡರಂತೆ ಪಾಪ ಸರ್ ಗೆ  ನನ್ನ   ಕಂಡರೆ ತುಂಬಾ  ಪ್ರೀತಿ.    ಆ  ಕಾಲದಲ್ಲಿ ಸ್ವಲ್ಪ ಸ್ತಿತಿವನ್ತರಷ್ಟೇ ಹಾರ್ಲಿಕ್ಸ್ , ಒವಲ್ಟೇನ್ ,  ವಿವಾ  ಇದನ್ನೆಲ್ಲಾ ಮ ಕ್ಕಳಿಗೆ ಹಾಲಿಗೆ ಹಾಕಿ  ಕುಡಿಯಲು ಕೊಡು ತ್ತಿದ್ದರು.   ಆದರೇ ನಮ್ಮ ಮನೆಯಲ್ಲಿ ಮನೆ ತುಂಬಾ ಮಕ್ಕಳು ಅಮ್ಮ  ಒಂದು ಪಾವು ಹಾಲಿಗೆ ಒಂದು ಪಾವು ನೀರು ಬೆರೆಸಿ  ನಮಗೆಲ್ಲ ಟೀ ಮಾಡಿ ಕೊಡುತ್ತಿದ್ದರು.   ನಂತರ ನಮಗೆಲ್ಲಾ ಕೊಟ್ಟ ಮೇಲೆ ಅವಳಿಗೆ ಏನೂ ಉಳಿಯುತ್ತಿರಲಿಲ್ಲ ಅಗಾ ಟೀ ಸೊಪ್ಪಿನ ಮೇಲೆ ಮತ್ತೊಂದಿಷ್ಟು ನೀರು ಹಾಕಿ ಕುದಿಸಿ ತಾನು ಕುಡಿಯುತ್ತಿದ್ದರು   ನಾನು ರಾಮ ಮೂರ್ತಿ  ಸರ್ ದಂಪತಿ ಗಳಿಂದ ಪ್ರೀತಿ  ಪಡೆಯುವುದರ ಜೊತೆ ಜೊತೆಗೆ ಹಾಲು,  ತುಪ್ಪ,ಒಳ್ಳೊಳ್ಳೆ ಊಟ ತಿಂಡಿ, ಕುರುಕಲು  ಎಲ್ಲ ತಿಂದುಂಡು ಗುಂಡು ಗುಂಡಾಗಿದ್ದೆ.   ನನ್ನ ಆಟ ಆಟ ನೋಡಿ ಖುಷಿ ಪಡುತ್ತಿದ್ದರು ಸಿರ್.  ಅವರ ಮನೆ ಇಂದ ಕರೆದೊಯ್ಯಲು ನನ್ನ  ಅಣ್ಣ ಅಕ್ಕ ಬಂದು ಸರ್  ಕಳುಹಿಸಿ ಕೊಡಿ ಎಂದು ಕೇಳಿದರೆ ಸರ್ ಮತ್ತೆ ಗಿರಿಜಾ ಮಿಸ್ ಹ್ಯಾಪ್ ಮೊರೆ ಹಾಕಿ ಕೊಂಡು ಕಳುಹಿಸುತ್ತಿದ್ದರು .    ಭಾನುವಾರ ಬಂತೆಂದರೆ ಶಾಲೆ ಇಲ್ಲ ಆದರೆ ನನ್ನ ಸರ್ ದಂಪತಿಗಳು  ಲಾಲ್ ಬಾಗ್ , ಕಬ್ಬನ್ ಪಾರ್ಕ್ ಗೆ ಕರೆದೊಯ್ಯುತ್ತಿದ್ದರು ಅಲ್ಲಿ  ಬಲೂನ್ , ಅವರು ಕಡಲೆಕಾಯಿ ತಿನ್ನುತ್ತ ನಂಗೆ  ಐಸ್ ಕ್ರೀಮ್ ಕೊಡಿಸುತ್ತಿದ್ದರು.   ನನಗೋ ಮಜವೋ ಮಜಾ.    ನಾನು ನಾಲಕ್ಕು  - ಐದನೇ  ತರಗತಿಗೆ ಬರುವ ವೇಳೆಗೆ ರಾಮಮೂರ್ತಿ ಸರ್ ಗೆ ಹಾಸನಕ್ಕೋ , ಮೈಸೂರ್ ಗೋ ವರ್ಗ ಆಯಿತು.   ಅವರು ಹೋಗುವಾಗ ಕಣ್ಣಿರು ಸುರಿಸುತ್ತ ನನ್ನನ್ನು ಮುದ್ದಾಡಿ ಹೋದರು.      ಆಗ ಫೋನ್ ಇಲ್ಲ ಸರ್ ನನಗೆ ಕಾಗದ ಬರೆಯಲು  ಹೇಳಿ ಕೊಟ್ಟಿದ್ದರು ಅವರ ಅಡ್ರೆಸ್ ಕೂಡ  ಕೊಟ್ಟಿದ್ದರು.   ನಾನು ನನ್ನ  ಅಣ್ಣ ಇಬ್ಬರು ಒಂದೇ  ಕಾರ್ಡಿನಲ್ಲಿ ಬರೆದು ಕಳುಹಿಸುತ್ತಿದ್ದೆವು ಅವರು  ನಮ್ಮ ಕಾಗದಕ್ಕೆ ಉತ್ತರಿಸುತ್ತಿದ್ದರು.    ನಾನು  ಹತ್ತನೇ ತರಗತಿಯಲ್ಲಿ     ಫಸ್ಟ್ ಕ್ಲಾಸಿನಲ್ಲಿ  ಪಾಸಾದ ವಿಷಯ ತಿಳಿಸಿದಾಗ  ತುಂಬಾ ಆನಂದ ಪಟ್ಟು  ನನಗೆ ಒಂದು  ಪಾರ್ಕರ್ ಪೆನ್ ಕೊಡಿಸಿದ್ದರು.  ಅದು ನನ್ಬಳಿ  ಈಗಲೂ ಇದೆ.       ಈಗ ಅವರಿಲ್ಲ  ಅವರ ನೆನಪು ನನ್ನಲ್ಲಿ ಹಚ್ಚ ಹಸಿರಾಗಿದೆ.   ನನ್ನಮ್ಮ ಯಾವಾಗಲೂ ಹೇಳುತ್ತಿದ್ದರು ಅದ್ಯಾವ ಜನ್ಮದ ಋಣಾನು ಬಂಧವೋ ಎಂದು !!! ನಿಮ್ಮದು ಗುರು-ಶಿಷ್ಯರ ಸಂಭಂದ ಅಲ್ಲಾ  ;  ತಂದೆ - ಮಗಳ ಸಂಬಂದ ಎಂದು .  ಆದರೆ ಈಗಿನ ದಿನಗಳಲ್ಲಿ  ಗುರು-ಶಿಷ್ಯಳ ಮೇಲೆ ಅತ್ಯಾಚಾರ ಎಸಗುವ ಘಟನೆಗಳು ಟಿ ವಿ ಯಲ್ಲ್ಲಿ ಪ್ರಸಾರ  ಆದಾಗ ಎಷ್ಟೊಂದು  ವೇದನೆ ಯಾಗುತ್ತದೆ .   ನಿಮಗೆ ಶಿರ ಸಾಷ್ಟಾಂಗ ವಂದನೆಗಳು ಸರ್ ಮತ್ತೆ ಹುಟ್ಟಿ ಬನ್ನಿ 

No comments:

Post a Comment