Tuesday, August 25, 2015

ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಅಮಾಯಕರಂತೆ ನಡೆದು ಕೊಂಡು ನಮ್ಮ ಮನಸ್ಸು ಗೆಲ್ಲುತ್ತಾರೆ
ತಮ್ಮ ಬೇಳೆ ಬೆಂದ ನಂತರ ಅವರ ರಿಯಲ್ ಸ್ವರೂಪ ತೋರಿಸುತ್ತಾರೆ !! ಎಂತಹ ಜನರಿವರು

ಒಳ್ಳೆಯವರಿಗಿದು ಕಾಲವಲ್ಲ ಶ್ರೀ ಹರಿ ನೀನೆ ಕಾಪಾಡ ಬೇಕು

ಇಷ್ಟು ಕೊಟ್ಟರೆ ಅಷ್ಟು ಬೇಕೆಂಬರು , ಅಷ್ಟು ಕೊಟ್ಟರೆ ಮತ್ತಷ್ಟು ಬೇಕೆಂಬರು , ಬೆರಳು ಕೊಟ್ಟರೆ ಹಸ್ತ  ನುಂಗಿದರು ಎಂಬಂತೆ

ಈ ಕಾಲದಲ್ಲಿ ಯಾರಿಗೂ ಸಹಾಯ ಮಾಡಬಾರದು ಅನ್ನಿಸುತ್ತೆ ಯಾಕೆಂದ್ರೆ ಸಹಾಯ ಯಾಚಿಸುತ್ತಾ ಬರುವವರು ನಮ್ಮಿಂದ ಸಹಾಯ ಪಡೆದ ನಂತರ ನಮ್ಮನ್ನು ತಿರುಗಿ ಕೂಡ ನೋಡುವುದಿಲ್ಲ  ಎಂತಹ ವಿಪರ್ಯಾಸ 

Wednesday, August 19, 2015



ಹೀಗೊಂದು ಪ್ರಹಸನ :

ಈಗ್ಗೆ ಮೂರು ವರುಷಗಳ ಹಿಂದೆ ಇದೆ ದಿನದಂದು ಅಂದ್ರೆ ನಾಗರ ಪಂಚಮಿ ದಿನದಂದು ನನ್ನ ಕಸಿನ್ ಮಗ ಅನಿರುದ್ಹ್ ಅಂತ ನಮ್ಮ ಮನೆಯಲ್ಲಿ ಇರುತ್ತಿದ್ದ ಸಮಯವದು, ಅಂದ್ರೆ ಆಗಿನ್ನೂ UKG  ಓದುತ್ತಿದ್ದ .  ಅವರ ಅಪ್ಪ ಅಮ್ಮ ಇಬ್ಬರು ಐ ಟಿ ಕಂಪನಿ ಉದ್ಯೋಗಿಗಳು ಅವರು ಆಫೀಸ್ ಬಂದ ನಂತರ ಅವರ ಜೊತೆ ಮಲಗಲು ಹೋಗುತ್ತಿದ್ದ ಅಂದರೆ ಅವನ ಊಟ ತಿಂಡಿ ರಾತ್ರಿ ಊಟ ಎಲ್ಲ ನಮ್ಮ ಮನೆಯಲ್ಲೇ ಆಗುತ್ತಿತ್ತು .     ಆಗ ಅವನಿಗೆ ಸುಮಾರು ೪ ವರುಷ ಇರಬಹುದು.  ವಿಪರೀತ ತುಂಟ , ತಂಟೆಕೋರ ಅವ.  ಆದರೆ ಊಟದ ವಿಷಯದಲ್ಲಿ ಎಂತದ್ದು ತಂಟೆ ಇರಲಿಲ್ಲ.  ಎಲ್ಲ ರೀತಿ ತಿಂಡಿ ಊಟ, ಹಣ್ಣು, ತರಕಾರಿ ಎಲ್ಲವನ್ನು ತಿನ್ನುತ್ತಿದ್ದ .  ಊಟದ ವಿಷಯದಲ್ಲಿ ಎಷ್ಟು ಅಚ್ಚು ಕಟ್ಟು ಅಂದರೆ ಹಬ್ಬ-ಹರಿದಿನ  ಹುಣ್ಣಿಮೆ- ಸಂಕಷ್ಟಿ  ದಿನಗಳಂದು ಅವನಿಗೆ ಊಟದ ಜೊತೆ ಜೊತೆಗೆ ಪಲ್ಯಗಳು, ಕೋಸಂಬರಿ, ಪಾಯಸ , ಹಪ್ಪಳ ಸಂಡಿಗೆ ಉಪ್ಪಿನಕಾಯಿ , ಗೊಜ್ಜಿನ ಚಿತ್ರಾನ್ನ, ಹಬ್ಬದ ಅಡಿಗೆ ಅಗ ಬೇಕು.   ಮೂರು ವರುಷಗಳ ಹಿಂದೆ ಇದೆ ನಾಗರ ಪಂಚಮಿ ದಿನದಂದು ಆವ ಹೇಳಿದ್ದು ಹೀಗೆ '' ಉಮ ಅಂಟಿ ನೀವು ನಾಗಪ್ಪನಿಗೆ ತನಿ ಎರೆದು ಆದ ಮೇಲೆ , ನಿಮ್ಮ ಪೂಜೆ ಎಲ್ಲಾ ಮುಗಿದ ನಂತರ'   ತಿಂಡಿ ತೀರ್ಥ ಅಂತ ಟೈಮ್ ವೇಸ್ಟ್ ಮಾಡ ಬೇಡಿ , ಯಾಕಂದ್ರೆ ಈ ದಿನ ಹಬ್ಬ ಅಡುಗೆ ಆಗಬೇಕು ಅದಕ್ಕೆ ಬೇಗ ಬೇಗ ಕುಕ್ಕರ್ ಇಟ್ ಬಿಡಿ , ಕೋಸಂಬರಿ ಮಾಡೋಕೆ ಸೌತೆಕಾಯಿ ಹಚ್ಚಿ ಕೊಡ್ತೀನಿ, ತೆಂಗಿನ ಕಾಯಿ ನಾನೇ ತುರಿದು ಕೊಡ್ತೀನಿ ನೀನೇನು ಯೋಚನೆ ಮಾಡಬೇಡ ಉಮ ಆಂಟಿ ನಾನ್ ನಿಂಗೆ ಹೆಲ್ಪ್ ಮಾಡ್ತೀನಿ, ಬೇಗ ಬೇಗ ಅಡುಗೆ ಮಾಡಿ ಅಂಕಲ್ ಗೆ, ಅಣ್ಣಂದಿರಿಗೆ ಊಟ ಮಾಡಿಕೊಂಡು ಆಫೀಸಿಗೆ ಹೋಗಲು ಹೇಳು ಆಮೇಲೆ ನಿಧಾನ ವಾಗಿ ಒಂದೊಂದೇ ಉಂಡೆ ಅಂದ್ರೆ ರವೆ ಉಂಡೆ, ಪುರಿ ಉಂಡೆ, ಎಳ್ಳಿನ ಉಂಡೆ ,ಚಕ್ಕುಲಿ ಎಲ್ಲ ಮಾಡೋಣ ನಮ್ ಅಜ್ಜಿ ಇದೆಲ್ಲ ಮಾಡ್ತಾರೆ .  ನೀನು ಮಾಡು ಉಮ ಆಂಟಿ ಅಂತ ಪೀಡಿಸ್ತ  ಇದ್ದ.  ನಾನು ''ಅಲ್ಲ ಪುಟ್ಟು ಇದೆಲ್ಲ ಅಜ್ಜಿ ಮಾಡ್ತಾರೆ ಕಣೋ ನಂಗೆ ಇವೆಲ್ಲ ಅಷ್ಟೊಂದು ಚೆನ್ನಾಗಿ ಮಾಡಲು ಬರೋಲ್ಲ '' ಅಂತ ಹೇಳಿದೆ.  ಅವನು ಕೇಳಬೇಕಲ್ಲ '' ನಂಗೆ ಅದೆಲ್ಲ ಗೊತ್ತಿಲ್ಲ ಅವೆಲ್ಲ ಮಾಡಿದ್ರೆನೇ ನಾನು ಊಟ ಮಾಡೋದು ಹೋಗು' ಅಂತ ಮುಖ ಓದಿಸಿಕೊಂಡು ಕುಳಿತ ಕಡೆಗೆ ಹೋಗಿ ಮಲ್ನಾಡ್ ಸ್ಟೋರ್ಸ್ ನಿಂದ ಅವನಿಗೆ ಏನೆಲ್ಲಾ ಬೇಕೋ ಅವೆಲ್ಲಾ  ಕೊಂದು ತಂದು , ಬಾಲೆ ಎಲೆ ಮೇಲೆ ಎಲ್ಲ ಬಡಿಸಿದ ಮೇಲೆ ಈ ಅಚ್ಚ ಕಟ್ ಬ್ರಾಹ್ಮಣ ಚೆನ್ನಾಗಿ ಊಟ ಮಾಡಿ ಎಲ್ಲವನ್ನು ತಿಂದು ತೇಗಿ ತೃಪ್ತನಾದ .  ನಂತರ ಉಮ ಅಂಟಿ ಒಂದು ಬಾಲೆ ಹಣ್ಣು ಕೊಡು ಎಂದು ತಿಂದು ಕೈ ಬಾಯಿ ತೊಳೆದು ಕೊಂಡು ಕಣ್ತುಂಬಾ ನಿದ್ದೆ ಮಾಡಿ ಸಂಜೆ ನಾಲ್ಕು ಘಂಟೆಗೆ ಎದ್ದ ಈ ಪುಣ್ಯಾತ್ಮ !!!! ನನಗೆ ಈ ದಿನ ಅನಿರುಧ್ ನೆನಪು ಬಹಳ ಬಂತು ಅವನು ಈಗ ಬೆಂಗಳೂರಿನಲ್ಲಿ ಇಲ್ಲಾ ನೆನೆಸಿಕೊಂಡಾಗ  ನೋಡಲು ಚಿಕ್ಕಮಂಗಳೂರಿನ  ಕಡುರಿಗೆ ಹೋಗಬೇಕು :) 

Thursday, August 13, 2015

ಮುತ್ತೈದೆಯರಿಗೆ ಅರಿಶಿನ ಕುಂಕುಮ ಕೊಡುವ ಪದ್ಧತಿ ಹೇಗೆ ಬಂತು ???



ಮುತ್ತೈದೆಯರಿಗೆ  ಅರಿಶಿನ ಕುಂಕುಮ ಹಾಗೂ ತಾಂಬೂಲ ಕೊಡುವ ಪದ್ಧತಿ ಹೇಗೆ ರೂಢಿಗೆ ಬಂತು ಎಂಬುದರ ಬಗ್ಗೆ ನಾನು ಚಿಕ್ಕವಳಿದ್ದಾಗ ನಮ್ಮಮ್ಮನನ್ನು  ಕೇಳುತ್ತಲೇ  ಇದ್ದೆ.  ಒಂದು ಬೇಸಿಗೆ ರಜೆಯ ದಿನ ನಮ್ಮಮ್ಮ  ಕೆಲಸ ಕಾರ್ಯಗಳನ್ನೆಲ್ಲ ಮುಗಿಸಿ ಅರಿಶಿನ ಕುಂಕುಮ ಕೊಡುವ ಪದ್ಧತಿ ಹೇಗೆ ಬಂತು ಅಂತ ಒಂದು  ಒಳ್ಳೆಯ ಕಥೆ ಇದೆ ಅದನ್ನ ನಮ್ಮಜಿ ನನಗೆ ಹೇಳ್ತಾ ಇದ್ದರು ಅದನ್ನೇ ನಾನು ನಿನಗೆ ಹೇಳ್ತೀನಿ ಅಂತ ನಮ್ಮಮ್ಮ ಈ ಕಥೆ ಹೇಳಿದ್ದರು . 
ಬಹಳ ಹಿಂದೆ ಒಂದು ಊರಿನಲ್ಲಿ ಮೂರು ಜನ ಒಂದೇ ಮನೆಯ ಅಣ್ಣ ತಮ್ಮಂದಿರು , ಒಂದೇ ಮನೆಯ ಅಕ್ಕ-ತಂಗಿಯರನ್ನು ಮದುವೆ ಮಾಡಿಕೊಂಡು ಸುಖವಾಗಿದ್ದರು . ಅವರ ತಂದೆಯ ಆಸ್ತಿಯನ್ನು ಸಿಕ್ಕಾ ಪಟ್ಟೆ, ಯದ್ವಾ ತದ್ವಾ ಪೋಲು ಮಾಡುತ್ತಾ ಹಣವನ್ನು ನೀರಿನಂತೆ ಚೆಲ್ಲುತ್ತ ಐಶಾರಾಮಿ ಜೀವನ ನಡೆಸುತ್ತಿದ್ದರು . ಆ ಮೂವರು ಅಕ್ಕ-ತಂಗಿಯರಲ್ಲಿ ದೊಡ್ಡವಳು ಎಷ್ಟೇ ಬುದ್ದಿ ಹೇಳಿದರೂ ಕೇಳದೆ ಅವಳ ತಂಗಿಯರು ಕೂಡ ಗಂಡಂದಿರೊಡನೆ ಹಣ ಪೋಲು ಮಾಡುತ್ತಾ ಇಷ್ಟ ಬಂದಂತೆ ಜೀವನ ನಡೆಸುತ್ತಿದ್ದರು.
ಆ ಮೂರು ಜನರಲ್ಲಿ  ಅಕ್ಕ ತುಂಬಾ ಒಳ್ಳೆಯವಳಾಗಿದ್ದು , ದೇವರಲ್ಲಿ, ಗುರು ಹಿರಿಯರಲ್ಲಿ ಭಕ್ತಿ ಹೊಂದಿದವಳಾಗಿದ್ದು ಒಳ್ಳೆಯ ಹೃದಯವಂತಿಕೆಯ ಸಾಧ್ವಿ . ಅವಳ ದಿನಚರಿ ಪ್ರತಿ ನಿತ್ಯ ಬೆಳಿಗ್ಗೆ ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನ ಮಾಡಿ ಮುಂಬಾಗಿಲಿಗೆ ದೊಡ್ಡ ದೊಡ್ಡ ರಂಗೋಲಿ ಹಾಕಿ , ದೇವರ ಪೂಜೆ ಮಾಡಿ, ಮನೆಯನ್ನು ಶುಚಿಗೊಳಿಸಿ ನಂತರ ಅಡುಗೆ ಕೆಲಸಕ್ಕೆ ಮುಂದಾಗುತ್ತಿದ್ದಳು . ಅವಳ ತಂಗಿಯರು ಬಹಳಾ ಸೋಮಾರಿಗಲಾಗಿದ್ದು ಅವಳ ಯಾವುದೇ ಕೆಲಸಕ್ಕೂ ಸಹಾಯ ಮಾಡದೆ ತಿಂದು ಉಂಡು ಹಣವನ್ನು ತಮಗಿಚ್ಚೆ ಬಂದಂತೆ ಪೋಲು ಮಾಡುತ್ತಾ ಅಕ್ಕನನ್ನು ಕೆಲಸದವಳಂತೆ ನಡೆಸಿ ಕೊಳ್ಳುತ್ತಿದ್ದರು .
ಇದನ್ನು ಕಂಡ ಸಾಕ್ಷಾತ್ ಲಕ್ಷ್ಮಿಗೆ ಇವರ ಮೇಲೆ ಬಹಳ ಕೋಪ ಬನ್ದಿತು. ನಾನ್ಯಾಕೆ ಇವರ ಮನೆಯಲ್ಲಿ ಕಾಲು ಮುರಿದುಕೊಂಡು ಬಿದ್ದಿರ ಬೇಕು ? ನನ್ನ ಮೇಲೆ ಅಗೌರವ ತೋರುವವರ ಮನೆಯಲ್ಲಿ ನಾನು ಇರಬಾರದು ಎಂದು ನಿರ್ಧರಿಸಿದಳು . ಬೆಳ್ಳಂ ಬೆಳಿಗ್ಗೆ ಮನೆ ಇಂದ ಹೊರ ಹೋಗುವ ನಿರ್ಧಾರ ಮಾಡಿ ಬೆಳಿಗ್ಗೆ ಆಗುವುದೇ ತಡ ಭ ರ ಭರನೇ ಅಲ್ಲಿಂದ ಹೊರಡಲು ಯತ್ನಿಸಿದಳು . ಮುಂಬಾಗಿಲಲ್ಲಿ ರಂಗೋಲಿ ಹಾಕುತ್ತಿದ್ದ ಅಕ್ಕ ಲಕ್ಷ್ಮಿಯನ್ನು ತಡೆದಳು. ''ತಾಯಿ ಯಾಕಿ ಕೋಪ , ಯಾಕೆ ನಮ್ಮನ್ನು ತೊರೆದು ಹೋಗುವ ಈ ನಿರ್ಧಾರ ? '' ಎಂದು ಪ್ರಶ್ನಿಸಿದಳು . ಅಗಾ ಸಾಕ್ಷಾತ್ ಲಕ್ಷ್ಮಿ ''ನಿನ್ನ ಗಂಡ, ಅವನ ತಮ್ಮಂದಿರು, ಹಾಗೂ ನಿನ್ನ ತಂಗಿಯರು ಸಹಾ ನನಗೆ ಗೌರವ ಕೊಡದೆ ನನ್ನನ್ನು ತುಚ್ಚವಾಗಿ ಕಾಣುತ್ತಿದ್ದಾರೆ ಅವರಿಗೆ ತಕ್ಕ ಪಾಠ ಕಲಿಸಬೇಕೆಂದರೆ ನಾನು ಇಲ್ಲಿಂದ ಹೋಗಲೇ ಬೇಕು, ನನ್ನನ್ನು ತಡೆಯಬೇಡ ಎಂದಳು . ಅಕ್ಕ ಎಷ್ಟೇ ಪರಿ ಪರಿಯಾಗಿ ಬೇಡಿಕೊಂಡರೂ ಲಕ್ಷ್ಮಿಯ ಮನ ಕರಗಲಿಲ್ಲ. ಆಗ ಅಕ್ಕ ''ತಾಯಿ ನನ್ನಿಂದ ನಿನ್ನ ನಿರ್ಧಾರ ಬದಲಿಸಲು ಆಗುತ್ತಿಲ್ಲ , ದಯ ಮಾಡಿ ನನ್ನ ಒಂದು ಕೋರಿಕೆ ನಡೆಸಿ ಕೊಡು , ನೀನು ಮುತ್ತೈದೆ ಆದ್ದರಿಂದ ಅರಿಶಿನ ಕುಂಕುಮ ತೆಗೆದು ಕೊಲ್ಲದೆ ಇಲ್ಲಿಂದ ಹೋಗುವಂತಿಲ್ಲ , ನಾನು ಬಂದು ಕುಂಕುಮ ಕೊಡುವ ತನಕ ಹೊಸ್ತಿಲ ದಾಟ ಬೇಡ , ಇದೊ ಈಗ ಬಂದೆ ಅರಿಶಿನ ಕುಂಕುಮ ತೆಗೆದುಕೊಂಡು ಹೋಗು'' ಎಂದು ಹೇಳಿ ಒಳ ಹೋದಳು
ಒಳಗೆ ಹೋದ ನಂತರ ಯೋಚಿಸುತ್ತಾಳೆ ನಾನು ಕುಂಕುಮ ಕೊಟ್ಟರೆ ಮಾತ್ರ ಇಲ್ಲಿಂದ ಹೊರತು ಹೋಗುತ್ತಾಳೆ , ಆಮೇಲೆ ನನ್ನ ಗಂಡನ ಮನೆ ದಟ್ಟ ದರಿದ್ರ ವಾಗುತ್ತೆ ಹೋದ ಮನೆಗೆ ಒಳ್ಳೆ ಹೆಸರು ತರ ಬೇಕು ಎಂದು ಅಪ್ಪ ಅಮ್ಮ ಹೇಳ್ತಾ ಇದ್ದರು ಹಾಗಾಗಿ ನಾನು ಪ್ರಾಣ ತ್ಯಾಗ ಮಾಡಿ ತಾಯಿ ಲಕ್ಷ್ಮಿ ಇಲ್ಲೇ ಇರುವಂತೆ ಮಾಡುತ್ತೇನೆ ಎಂದವಳೇ ಹಿತ್ತಲಿನಲ್ಲಿದ್ದ ಬಾವಿಗೆ ಹಾರಿ ಪ್ರಾಣ ತ್ಯಾಗ ಮಾಡಿದಳು. ಇತ್ತ ಲಕ್ಷ್ಮಿ ಎಷ್ಟು ಹೊತ್ತಾದರೂ ಅಕ್ಕ ಬಾರದ್ದರಿಂದ ಮತ್ತೆ ಮನೆಯ ಒಳಗೆ ಹೋಗಿ ಅಲ್ಲೇ ಶಾಶ್ವತ ವಾಗಿ ನೆಲೆಸಿದಳು . ಅಕ್ಕನ ಜಾಣ ತನ ದಿಂದ ಅವಳ ಗಂಡನ ಮನೆಯಲ್ಲಿ ಲಕ್ಷ್ಮಿ ಶಾಶ್ವತವಾಗಿ ಉಳಿದಳು ಎಂಬಲ್ಲಿಗೆ ಅರಿಶಿನ-ಕುಂಕುಮ ಕೊಡುವ ಪದ್ಧತಿ ಜಾರಿಯಾದ ಈ ಸುಂದರ ಕಥೆ ಇಲ್ಲಿಗೆ ಮುಕ್ತಾಯ ವಾಯಿತು.