Thursday, December 25, 2014

ಚಂಚಲ ಮನಸ್ಸು






ಚಂಚಲ ಮನಸ್ಸು


ಸಮುದ್ರದಲ್ಲಿರುವ ನೀರು ಒಳ ನುಗ್ಗಿದರೆ ಮಾತ್ರ ಹಡಗು ಮುಳುಗುತ್ತದೆ. ಆಂತಯೇ ದುರಾಲೋಚನೆಗಳು ಕೂಡಾ ಮನಸ್ಸಿಗೆ ಲಗ್ಗೆ ಇಟ್ಟರೆ ಅನಾಹುತಗಳು ಖಚಿತ .  ಆದುದರಿಂದ ಇಂದ್ರಿಯಗಳ ನಿಗ್ರಹಣೆ  ಮಾಡುವಿದು ಒಳಿತು.
ಮನಸ್ಸು ಮರ್ಕಟ ನಂತೆ , ಅಲ್ಲೋಲಕಲ್ಲೋಲ ಆಗುವುದು ಬೇಗ; ಚಂಚಲ ಮನಸ್ಸಿಗೆ ಸ್ವತಂತ್ರವಾಗಿ ನಿರ್ಧರಿಸುವುದು ಬಹಳ ಸರಾಗಯಾರ ನಿರ್ದೇಶನ ಬೇಡ, ಯಾರ ಉಪದೇಶವೂ ಬೇಡ.  ಮನಸ್ಸು ಅದೆಷ್ಟು ಚಂಚಲ ಎಂದರೆ ಮನಸ್ಸಿನ ನಿಗ್ರಹದಲ್ಲಿ ಧೃಡತೆ ಇಲ್ಲವಾದಲ್ಲಿ ಮನಸ್ಸಿನಲ್ಲಿ ಕ್ಷೋಭೆ ಉಂಟಾಗಿ ಅದು ಬಿರುಗಾಳಿ ಯಷ್ಟೇ ಬಿರುಸಾಗಿ ಬಿಟ್ಟರೆ ಅದನ್ನು ತಹಬಂದಿಗೆ ತರುವುದು ಗಾಳಿಯನ್ನು ಹಿಡಿದಿಡುವಷ್ಟೇ ಆಸಾಧ್ಯ.  ಮನಸ್ಸು  ಧುಮ್ಮಿಕ್ಕುವ ಜಲಪಾತದೋಪಾದಿಯಂತೆ ' ಎಷ್ಟು  ಪ್ರಶಾಂತವಾಗಿ ಕಣ್ಮನ ತುಂಬುತ್ತದೆಯೋ ; ಅದೇ ಸುಂದರ ಮನಸ್ಸು ಬತ್ತಿ ಹೋದ ಜಲಪಾತದಂತೆ  ಅಷ್ಟೇ ಪ್ರಕ್ಶುಬ್ದಮಾನವಾಗಿ ಕಲುಷಿತವಾಗುತ್ತದೆ ಕೂಡ.  ಮನಸ್ಸೆಂಬ  ಪಂಜರದಲ್ಲಿ ಪ್ರೀತಿ ಬಂದಾಗ ಅದು ಸುಂದರವಾದ ಭಾವನಾ ಲೋಕದಲ್ಲಿ ವಿಹರಿಸಿ , ಸುಂದರ ಕನಸ್ಸುಗಳ ಕೋಟೆಯನ್ನೇ ನಿರ್ಮಿಸಿ ಅದರಲ್ಲಿ ವಿಹರಿಸುತ್ತಿರುತ್ತದೆ ; ಅದೇ ಮನಸ್ಸೆಂಬ  ಪಂಜರದಲ್ಲಿ ಕ್ರೋಧ, ದ್ವೇಷ ಉಂಟಾದಾಗ  ಆ ಸುಂದರ ಮನಸ್ಸು ವಿಷಪೂರಿತಗೊಂದು ವಿಕಾರಗೊಳುತ್ತದೆ .  ಮನಸ್ಸಿನಿಂದ ಇಂದ್ರಿಯಗಳ ನಿಗ್ರಹ ಸಾಧ್ಯ ಇದೆ.  ಮನಸ್ಸು ಹತೋಟಿ ಯಲ್ಲಿದ್ದರೆ ಅಸಾಧ್ಯವಾದುದನ್ನು ಸಹಾ ಸಾಧ್ಯ  ಮಾಡುವ ಶಕ್ತಿ ಅದಕ್ಕಿದೆ.  ಮನಸ್ಸನು ಭಾವನಾತ್ಮಕವಾಗಿ ಸಂತೈಸ ಬೇಕು   ಭಾವನೆಗಳೇ ಅಲ್ಲವೇ ಮನಸ್ಸಿಗೆ ಮುದ ನೀಡುವುದು . ಒಳ್ಳೆ ಯ ಮನಸ್ಸಿನಿಂದ ದಿಟ್ಟ ಗುರಿಯೊಂದಿಗೆ ಮುನ್ನಡೆಯಿರಿ. ಗೆಲುವು ನಿಮ್ಮದಾಗುತ್ತದೆ.  


2 comments:

  1. ಮಹಾನ್ ಕಳ್ಳ ಈ ಮನಸು. ತುಸು ಯಾಮಾರಿದರೂ ನಮ್ಮನ್ನು ಸಂಪೂರ್ಣ ಸ್ವಾಧೀನಪಡಿಸಿಕೊಂಡು ಆಳಿಬಿಡುತ್ತದೆ.
    ಮನೋ ನಿಗ್ರಹದ ಬಗ್ಗೆ ಒಳ್ಳೆಯ ಕಿವಿ ಮಾತು.

    ReplyDelete