Monday, December 15, 2014

ಶ್ರೀ ಗಣೇಶಾಯ ನಮಃ




ಗಣೇಶ ಹಿಂದೂ ಧರ್ಮದ ಪ್ರಮುಖ ದೇವತೆಗಳಲ್ಲಿ ಒಬ್ಬ ನಮ್ಮ ಮುದ್ದು 'ಗಣಪ'.  ಭಾದ್ರಪದ ಮಾಸದಲ್ಲಿ ಬರುವ ಗಣೇಶ ಚೌತಿಯ ದಿನ, ಗಣೇಶನ ಹಬ್ಬವನ್ನು ಆಚರಿಸಲಾಗುತ್ತದೆ.  ವಿಶೇಷವಾಗಿ ಭಾರತದಲ್ಲಿ ಮಾತ್ರವಲ್ಲದೆ,  ಇತರೆ ಎಲ್ಲಾ ದೇಶಗಳಲ್ಲೂ ಗಣೇಶನನ್ನು ಪೂಜಿಸಲಾಗುತ್ತದೆ. ಹಾಗಾಗಿ ನಮ್ಮ ಮುದ್ದು ಗಣಪನನ್ನು 'Universally Worshipped & Accepted God '  ಅಂತಲೂ ಎಲ್ಲರೂ ಒಪ್ಪುತ್ತಾರೆ .ಶ್ರೀ ವಿನಾಯಕನನ್ನು ಗಜಾನನ, ಸುಮುಖ, ಗೌರಿತನಯ, ವಕ್ರ ತುಂಡ, ಪಾರ್ವತೀ ತನಯ, ಮೂಷಿಕ ವಾಹನ, ಮೋದಕ ಹಸ್ತ, ಚಾಮರ ಕರ್ಣ, ಇನ್ನು ಹೆಸರಿಸುತ್ತ ಹೋದರೆ ಅದಕ್ಕೆ ಕೊನೆಯೇ ಇಲ್ಲ.  ಅಬಾಲ ವೃದ್ಧರಾದಿಯಾಗಿ ಪ್ರತಿಯೊಬ್ಬರೂ ತುಂಬ ಇಷ್ಟ ಪಡುವ ದೇವರು ನಮ್ಮ ಮುದ್ದು ಮುದ್ದು ಬೆನಕ.  ಆನೆಯ ತಲೆ ನಂಬಿಕೆ,ಬುದ್ಧಿವಂತಿಕೆ ಮತ್ತು ವಿವೇಚನಾಶಕ್ತಿಯನ್ನು ಸೂಚಿಸುತ್ತದೆ;  ಒಂದು ದಂತ ಇರುವುದೆಂಬ ಸಂಗತಿಯಿಂದಾಗಿ ಬಲಗಡೆ ಸೊಂಡಿಲು ಇರುವ ಗಣಪತಿಯನ್ನು 'ಬಲ ಮುರಿ' ಎಂದೂ; ಸೊಂಡಿಲು ಇರುವ ಗಣಪತಿಯನ್ನು 'ಎಡ ಮುರಿ ಗಣಪತಿ' ಎಂದು ಹೇಳುವ ಪ್ರತೀತಿ. ಅಗಲವಾದ ಕಿವಿಗಳು ಇರುವುದರಿಂದ 'ಚಾಮರ ಕರ್ಣ' ನೆಂದು ಕರೆಯುತ್ತಾರೆ.  ಇದು ವಿವೇಕ,ನೆರವು ಕೋರುವ ಜನಗಳ ಮೊರೆಯನ್ನು ಆಲಿಸುವ ಸಾಮರ್ಥ್ಯವನ್ನು ಸೂಚಿಸುತ್ತದೆ.  ಗಣೇಶನ ವಾಹನ,ಇಲಿ ಅಥವಾ ಮೂಷಿಕ ಹಾಗಾಗಿ ಅವನನ್ನು 'ಮೂಷಿಕ ವಾಹನ' ಎಂದೂ ಕರೆಯುತ್ತಾರೆ.   ಪಾರ್ವತಿಯ ಮಗನಾದ್ದರಿಂದ 'ಪಾರ್ವತೀ ತನಯ' ಎನ್ನುತ್ತಾರೆ .  ಸಿದ್ದಿ-ಬುದ್ದಿಯರನ್ನು ಮದುವೆ ಯಾದುದರಿಂದ
ಗಣಪತಿಯ ಎಡ-ಬಲ ಗಳಲ್ಲಿ ಸಿದ್ದಿ-ಬುದ್ದಿ ಯಾರನ್ನು ಕಾಣಬಹುದು.

ಹೇ ವಿಘ್ನ ವಿನಾಶಕ ನನ್ನದೊಂದು ಪುಟ್ಟು ಕೋರಿಕೆ ನಿನ್ನಲ್ಲಿ  ಮನುಕುಲಕ್ಕೆ ಸೂಕ್ಷ್ಮ ಬುದ್ದಿಯನ್ನು ಸದಾ ಕರುಣಿಸು
ಪ್ರಕೃತಿಯನ್ನು ಹದಗೆಡಿಸದಿರುವ ಮತಿ ಅನುದಿನ ಕೊಡು ; ಎಲ್ಲ ಪ್ರಾಣಿವರ್ಗ, ಸಸ್ಯವರ್ಗವನ್ನೂ ಪ್ರೀತಿಯಿಂದ ಕಾಪಾಡುವ ಹೃದಯ ಕೊಡು  ಬದುಕ ಪ್ರೀತಿಸಿ ಬದುಕಿ ಬದುಕಲು ಬಿಡುವಂತ ದಿವ್ಯ ದೃಷ್ಟಿ ಕೊಡು
ಪರರ ತಪ್ಪ ಕ್ಷಮಿಸುವಂಥ  ಧೈರ್ಯವನ್ನು  ಪ್ರದರ್ಶಿಸುವ ಅವಕಾಶವನ್ನು ಮರೆಯದೆ ಕಲ್ಪಿಸು

ದುಷ್ಟರ ಶಿಕ್ಷಿಸು , ಶಿಷ್ಟರ ಸದಾ ರಕ್ಷಿಸು ವಿಘ್ನಗಳ ಕಳೆಯೋ 'ವಿಘ್ನ ವಿನಾಶಕ''

ನೀನೆ ತೋರುವೆ ದಾರಿಯ ನಮಗೆ ನಿನ್ನನೆ ನಂಬೆ ಮುಂದಡಿ ಇಡುವೆ ಹೇ ಗಣಪತಿಯೇ ಸಲಹು ನಮ್ಮನನವರತ

ಮೂಷಿಕ ವಾಹನ ಮೋದಕ ಹಸ್ತಾ , ಚಾಮರ ಕರ್ಣ ವಿಳಂಬಿತ ಸೂತ್ರ
ವಾಮನ ರೂಪ ಮಹೇಶ್ವರ ಪುತ್ರ, ವಿಘ್ನ ವಿನಾಯಕ ಪಾದ ನಮಸ್ತೆ ನಮಸ್ತೆ ನಮಸ್ತೆ  ನಮಃ
 

No comments:

Post a Comment